YOUTUBE CHANNEL


NAMMA SUPERSTARS

ಬೋಲ್ಡ್ ಫೋಟೋಶೂಟ್ - "ಚೈತ್ರಾ ಜೆ. ಆಚಾರ್" : 🎬☺

'ಮಹಿರಾ', 'ಟೋಬಿ', 'ಸಪ್ತ ಸಾಗರದಾಚೆ ಎಲ್ಲೋ-೨' ಹಾಗೂ 'ಬ್ಲಿಂಕ್' ಮುಂತಾದ ಚಿತ್ರಗಳಲ್ಲಿ ತಮ್ಮ ನಟನೆಯಿಂದ ಪ್ರೇಕ್ಷಕರ ಮನಗೆದ್ದಿರುವ ನಟಿ "ಚೈತ್ರಾ ಜೆ. ಆಚಾರ್". ಬೆಂಗಳೂರಿನಲ್ಲಿ ಜನಿಸಿದ ಇವರು ಎಂಜಿನಿಯರಿoಗ್ ಹಿನ್ನೆಲೆ ಹೊಂದಿದ್ದಾರೆ, 'ಬೆಂಗಳೂರು ಕ್ವೀನ್ಸ್' ವೆಬ್ ಸರಣಿಯೊಂದಿಗೆ ವೃತ್ತಿಜೀವನ ಆರಂಭಿಸಿ, 'ಮಹಿರಾ' ಮೂಲಕ ಸಿನೆಮಾಗೆ ಪಾದಾರ್ಪಣೆ ಮಾಡಿದರು.

ಎರಡು ತಮಿಳು ಚಿತ್ರಗಳಲ್ಲಿ ನಟಿಸಿ, ತಮಿಳು ಚಿತ್ರರಂಗಕ್ಕೂ ಕಾಲಿಟ್ಟಿದ್ದಾರೆ ಹಾಗು 'ಹ್ಯಾಪಿ ಬರ್ತ್ಡೇ ಟು ಮಿ' ಚಿತ್ರ ಒಟಿಟಿಯಲ್ಲಿ ಬಿಡುಗಡೆಯಾಗಿದೆ. 'ಗರುಡ ಗಮನ ವೃಷಭ ವಾಹನ' ಚಿತ್ರದ 'ಸೋಜುಗದ ಸೂಜುಮಲ್ಲಿಗೆ' ಹಾಡಿಗೆ ಸೈಮಾ ಪ್ರಶಸ್ತಿ ಲಭ್ಯವಾಗಿದೆ. ಅವರ ಮುಂದಿನ ಚಿತ್ರಗಳು "ಅಕಟಕಟ" ಚಿತ್ರದಲ್ಲಿ ಮಧ್ಯಮ ವರ್ಗದ ಹುಡುಗಿಯ ಪಾತ್ರ, ಹಾಗು 'ಮಾರ್ನಮಿ', 'ಉತ್ತರಕಾಂಡ' ಸಿನಿಮಾಗಳಲ್ಲಿ ನಟನೆ ಮಾಡಿದ್ದಾರೆ.

"ಚೈತ್ರಾ ಜೆ. ಆಚಾರ್"ರವರು ಸದಾ ವಿಭಿನ್ನ ಮತ್ತು ಬೋಲ್ಡ್ ಫೋಟೋಶೂಟ್‌ಗಳಿಂದ ಸುದ್ದಿಯಾಗುತ್ತಾರೆ. ಇದೀಗ ಮತ್ತೆ ಬೋಲ್ಡ್ ಫೋಟೋಶೂಟ್‌ಗಳಿಂದ ಸುದ್ದಿಯಾಲ್ಲಿದ್ದಾರೆ. "IMAGINATION TAKES CONTROL" ಎಂದು "INSTAGRAM"ನಲ್ಲಿ ಕ್ಯಾಷ್ಷನ್ ಹಾಕಿಕೊಂಡಿದ್ದಾರೆ.

#NammaSuperstars #nammasupers #starkannadamedianetwork #starkannada #chaithrajachar #actresslife #photoshoot #boldshoots #kannadamovies #sandalwoodnews

5 months ago | [YT] | 2

NAMMA SUPERSTARS

ಶುಕ್ರವಾರದ ಸಿನಿಮಾ - ಜಿ.ಎಸ್.ಟಿ : 📽🎬😊

ಸೃಜನ್ ಲೋಕೇಶ್ ಅವರು ನಿರ್ದೇಶನದ ಮೊದಲ ಪ್ರಯತ್ನ ಮಾಡಿದ್ದಾರೆ. ಸೃಜನ್ ಲೋಕೇಶ್ ನಾಯಕನಾಗಿ ನಟಿಸುವುದಲ್ಲದೆ, ಪ್ರಥಮ ಬಾರಿಗೆ ಚೊಚ್ಚಲ ನಿರ್ದೇಶನ ಮಾಡಿರುವ ಕನ್ನಡ ಹಾರರ್-ಹಾಸ್ಯ ಚಿತ್ರ "ಜಿ.ಎಸ್.ಟಿ" (ಘೋಸ್ಟ್ ಇನ್ ಟ್ರಬಲ್), ಚಿತ್ರ ಇಂದು ತೆರೆಗೆ ಬರಲಿದೆ. ಸುಮಾರು ಎರಡು ವರ್ಷಗಳ ಹಿಂದೆ ಸೆಟ್ಟೇರಿದ್ದ ಈ ಸಿನಿಮಾವನ್ನು ಸಂದೇಶ್ ಪ್ರೊಡಕ್ಷನ್ಸ್ನಡಿ ಸಂದೇಶ್ ನಾಗರಾಜ್ ನಿರ್ಮಾಣ ಮಾಡಿದ್ದಾರೆ. ನಿರ್ದೇಶನದ ಜೊತೆಗೆ ನಾಯಕನಾಗಿಯೂ ಸೃಜನ್ ಈ ಸಿನಿಮಾದಲ್ಲಿ ನಟಿಸಿದ್ದಾರೆ. ಚಿತ್ರಕ್ಕೆ ಸೆನ್ಸಾರ್ ಮಂಡಳಿಯು 'ಯು/ಎ' ಪ್ರಮಾಣಪತ್ರ ನೀಡಿದೆ. ಚಿತ್ರದ ನಿರ್ಮಾಣದ ಜೊತೆಗೆ ನಿರ್ಮಾಪಕ ಸಂದೇಶ್ ಅವರು ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರದಲ್ಲಿ ಗಿರಿಜಾ ಲೋಕೇಶ್ ಹಾಗೂ ಸೃಜನ್ ಅವರ ಪುತ್ರ ಸುಕೃತ್ ಅಭಿನಯಿಸಿದ್ದಾರೆ. ತಮ್ಮ ನಿರ್ದೇಶನದ ಮೊದಲ ಚಿತ್ರದಲ್ಲೇ ಸೃಜನ್ ತಮ್ಮ ತಾಯಿ ಹಾಗೂ ಮಗನಿಗೆ ???ಕ್ಷನ್ ಕಟ್ ಹೇಳಿದ್ದಾರೆ. ಮನರಂಜನೆಯೇ ಪ್ರಧಾನವಾಗಿರುವ ಈ ಚಿತ್ರಕ್ಕೆ 'ಘೋಸ್ಟ್ ಇನ್ ಟ್ರಬಲ್' ಎಂಬ ಅಡಿಬರಹವಿದೆ.

ಸೃಜನ್ ಲೋಕೇಶ್‌ಗೆ ನಾಯಕಿಯಾಗಿ ರಜನಿ ಭಾರದ್ವಾಜ್ ನಟಿಸಿದ್ದಾರೆ. ಪ್ರಮೋದ್ ಶೆಟ್ಟಿ, ಶೋಭರಾಜ್, ಶರತ್ ಲೋಹಿತಾಶ್ವ, ನಿವೇದಿತಾ ಗೌಡ, ಅರವಿಂದ್ ರಾವ್, ತಬಲ ನಾಣಿ, ರವಿಶಂಕರ್ ಗೌಡ, ವಿನೋದ್ ಗೊಬ್ಬರಗಾಲ ಮುಂತಾದವರು ಈ ಸಿನಿಮಾದ ತಾರಾಬಳಗದಲ್ಲಿದ್ದಾರೆ. ಚಂದನ್ ಶೆಟ್ಟಿ ಸಂಗೀತ ನಿರ್ದೇಶನ ಹಾಗೂ ಗುಂಡ್ಲುಪೇಟೆ ಸುರೇಶ್ ಅವರ ಛಾಯಾಚಿತ್ರಗ್ರಹಣ ಚಿತ್ರಕ್ಕಿದೆ. ರಾಜಶೇಖರ್ ಸಂಭಾಷಣೆ ಬರೆದಿದ್ದಾರೆ.

ಸೃಜನ್ ಲೋಕೇಶ್ ಚೊಚ್ಚಲ ನಿರ್ದೇಶನ ಮಾಡಿರುವ ಕನ್ನಡ ಹಾರರ್-ಹಾಸ್ಯ ಚಿತ್ರ "ಜಿ.ಎಸ್.ಟಿ" (ಘೋಸ್ಟ್ ಇನ್ ಟ್ರಬಲ್), ಇಂದು ನವೆಂಬರ್ ೨೮, ೨೦೨೫ ರಂದು ಬಿಡುಗಡೆಯಾಗಿ ಯಶಸ್ವಿಯಾಗಿ ಮುನ್ನುಗುತ್ತಿದೆ.



#Nammasuperstars #Starkannada #nammasuperstars #surjanlokesh #gstmovie #kannadamovies #sandalwoodmovies #girijalokesh #novemberrelease

6 months ago | [YT] | 1

NAMMA SUPERSTARS

ಶುಕ್ರವಾರದ ಸಿನಿಮಾ - ಜಿ.ಎಸ್.ಟಿ : 📽🎬😊

ಸೃಜನ್ ಲೋಕೇಶ್ ಅವರು ನಿರ್ದೇಶನದ ಮೊದಲ ಪ್ರಯತ್ನ ಮಾಡಿದ್ದಾರೆ. ಸೃಜನ್ ಲೋಕೇಶ್ ನಾಯಕನಾಗಿ ನಟಿಸುವುದಲ್ಲದೆ, ಪ್ರಥಮ ಬಾರಿಗೆ ಚೊಚ್ಚಲ ನಿರ್ದೇಶನ ಮಾಡಿರುವ ಕನ್ನಡ ಹಾರರ್-ಹಾಸ್ಯ ಚಿತ್ರ "ಜಿ.ಎಸ್.ಟಿ" (ಘೋಸ್ಟ್ ಇನ್ ಟ್ರಬಲ್), ಚಿತ್ರ ಇಂದು ತೆರೆಗೆ ಬರಲಿದೆ. ಸುಮಾರು ಎರಡು ವರ್ಷಗಳ ಹಿಂದೆ ಸೆಟ್ಟೇರಿದ್ದ ಈ ಸಿನಿಮಾವನ್ನು ಸಂದೇಶ್ ಪ್ರೊಡಕ್ಷನ್ಸ್ನಡಿ ಸಂದೇಶ್ ನಾಗರಾಜ್ ನಿರ್ಮಾಣ ಮಾಡಿದ್ದಾರೆ. ನಿರ್ದೇಶನದ ಜೊತೆಗೆ ನಾಯಕನಾಗಿಯೂ ಸೃಜನ್ ಈ ಸಿನಿಮಾದಲ್ಲಿ ನಟಿಸಿದ್ದಾರೆ. ಚಿತ್ರಕ್ಕೆ ಸೆನ್ಸಾರ್ ಮಂಡಳಿಯು 'ಯು/ಎ' ಪ್ರಮಾಣಪತ್ರ ನೀಡಿದೆ. ಚಿತ್ರದ ನಿರ್ಮಾಣದ ಜೊತೆಗೆ ನಿರ್ಮಾಪಕ ಸಂದೇಶ್ ಅವರು ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರದಲ್ಲಿ ಗಿರಿಜಾ ಲೋಕೇಶ್ ಹಾಗೂ ಸೃಜನ್ ಅವರ ಪುತ್ರ ಸುಕೃತ್ ಅಭಿನಯಿಸಿದ್ದಾರೆ. ತಮ್ಮ ನಿರ್ದೇಶನದ ಮೊದಲ ಚಿತ್ರದಲ್ಲೇ ಸೃಜನ್ ತಮ್ಮ ತಾಯಿ ಹಾಗೂ ಮಗನಿಗೆ ???ಕ್ಷನ್ ಕಟ್ ಹೇಳಿದ್ದಾರೆ. ಮನರಂಜನೆಯೇ ಪ್ರಧಾನವಾಗಿರುವ ಈ ಚಿತ್ರಕ್ಕೆ 'ಘೋಸ್ಟ್ ಇನ್ ಟ್ರಬಲ್' ಎಂಬ ಅಡಿಬರಹವಿದೆ.

ಸೃಜನ್ ಲೋಕೇಶ್‌ಗೆ ನಾಯಕಿಯಾಗಿ ರಜನಿ ಭಾರದ್ವಾಜ್ ನಟಿಸಿದ್ದಾರೆ. ಪ್ರಮೋದ್ ಶೆಟ್ಟಿ, ಶೋಭರಾಜ್, ಶರತ್ ಲೋಹಿತಾಶ್ವ, ನಿವೇದಿತಾ ಗೌಡ, ಅರವಿಂದ್ ರಾವ್, ತಬಲ ನಾಣಿ, ರವಿಶಂಕರ್ ಗೌಡ, ವಿನೋದ್ ಗೊಬ್ಬರಗಾಲ ಮುಂತಾದವರು ಈ ಸಿನಿಮಾದ ತಾರಾಬಳಗದಲ್ಲಿದ್ದಾರೆ. ಚಂದನ್ ಶೆಟ್ಟಿ ಸಂಗೀತ ನಿರ್ದೇಶನ ಹಾಗೂ ಗುಂಡ್ಲುಪೇಟೆ ಸುರೇಶ್ ಅವರ ಛಾಯಾಚಿತ್ರಗ್ರಹಣ ಚಿತ್ರಕ್ಕಿದೆ. ರಾಜಶೇಖರ್ ಸಂಭಾಷಣೆ ಬರೆದಿದ್ದಾರೆ.

ಸೃಜನ್ ಲೋಕೇಶ್ ಚೊಚ್ಚಲ ನಿರ್ದೇಶನ ಮಾಡಿರುವ ಕನ್ನಡ ಹಾರರ್-ಹಾಸ್ಯ ಚಿತ್ರ "ಜಿ.ಎಸ್.ಟಿ" (ಘೋಸ್ಟ್ ಇನ್ ಟ್ರಬಲ್), ಇಂದು ನವೆಂಬರ್ ೨೮, ೨೦೨೫ ರಂದು ಬಿಡುಗಡೆಯಾಗಿ ಯಶಸ್ವಿಯಾಗಿ ಮುನ್ನುಗುತ್ತಿದೆ.


#Nammasuperstars #Starkannada #nammasuperstars #surjanlokesh #gstmovie #kannadamovies #sandalwoodmovies #girijalokesh #novemberrelease

6 months ago | [YT] | 1

NAMMA SUPERSTARS

ಶೆಟ್ರ‍್ಗೆ ಜೋಡಿಯಾದ ಸುಶ್ಮಿತಾ ಭಟ್ :🎬📽😊

ಕನ್ನಡ ಸೀರಿಯಲ್ ಮೂಲಕ ಕನ್ನಡಿಗರಿಗೆ ಚಿರಪರಿಚಿತರಾದ ಸುಶ್ಮಿತಾ ಭಟ್ ಮೂಲತಃ ಶಾಸ್ತ್ರೀಯ ನೃತ್ಯಪಟು. ಮಮ್ಮುಟ್ಟಿ ನಟನೆಯ ಮಲಯಾಳಂ "ಡೊಮಿನಿಕ್ ಅಂಡ್ ದ ಲೇಡಿಸ್ ಪರ್ಸ್'ನ ಪಾತ್ರಕ್ಕೆ ಪ್ರಶಂಸೆ ಗಳಿಸಿರುವ ಸುಶ್ಮಿತಾ ಈಗ "ಕರಾವಳಿ" ಚಿತ್ರದ ಮೂಲಕ ಕನ್ನಡ ಹಿರಿತೆರೆಯಲ್ಲಿ ಮತ್ತೊಮ್ಮೆ ಮೋಡಿ ಮಾಡಲು ಸಜ್ಜಾಗಿದ್ದಾರೆ. ಈಗಾಗಲೇ ಕನ್ನಡ, ಮಲಯಾಳಂ, ತಮಿಳು, ತೆಲುಗಿನಲ್ಲಿ ನಟನೆ ಮಾಡಿ ಟ್ಯಾಲೆಂಟ್ ತೋರಿಸಿ ಸೈ ಎನಿಸಿಕೊಂಡಿರುವ ಇವರು ಪಾತ್ರ ಆಯ್ಕೆಗೆ ವಿಶೇಷ ಗಮನ ನೀಡುತ್ತಾರೆ.

ನಟನೆ ಯಾವುದೇ ಪಾತ್ರ ಮಾಡಬೇಕು ಅಂದರೂ ಅದು ಭಿನ್ನವಾಗಿ ಇರಬೇಕು. ಸವಾಲು ನೀಡುವಂತಿರಬೇಕು. ಹಿಂದೆoದೂ ಮಾಡಿರದ ಪಾತ್ರವಾಗಿರಬೇಕು ಎಂದು ಹೇಳಿದ್ದಾರೆ. ಹೀಗಾಗಿ ಸುಶ್ಮಿತಾ ಭಟ್ "ಕರಾವಳಿ" ಸಿನಿಮಾದಲ್ಲಿ ರಾಜ್ ಬಿ. ಶೆಟ್ಟಿ ಅವರಿಗೆ ಜೋಡಿಯಾಗಿದ್ದಾರೆ.


#NammaSuperstars #starkannada #nammasuperstars #RajBShetty #SushmithaBhat #karavali #kannadamovies #sandalwoodmovies

6 months ago | [YT] | 2

NAMMA SUPERSTARS

ರೆಬೆಲ್ ಸ್ಟಾರ್ - ಹೀ-ಮ್ಯಾನ್ - ಸ್ನೇಹಪರ್ವ : 📽🎬😊

ರೆಬೆಲ್ ಸ್ಟಾರ್ ಅಂಬರೀಶ್ ೭ ವರ್ಷಗಳ ಹಿಂದೆ ೨೦೧೮, ನವೆಂಬರ್ ೨೪ ಕೊನೆಯುಸಿರೆಳೆದಿದ್ದರು. ನವೆಂಬರ್ ೨೪ ಅಂಬರೀಶ್ ಕುಟುಂಬ ೭ನೇ ಪುಣ್ಯಸ್ಮರಣೆಯಂದು ಸಮಾಧಿ ಪೂಜೆಯನ್ನು ಸಲ್ಲಿಸಿದೆ. ಇತ್ತ ಧರ್ಮೇಂದ್ರ ಅದೇ ದಿನ ಅಂದರೆ, ೨೦೨೫ ನವೆಂಬರ್ ೨೪ ಅಪಾರ ಅಭಿಮಾನಿ ಬಳಗವನ್ನು ಅಗಲಿದ್ದಾರೆ. ಇಬ್ಬರು ಸ್ನೇಹಿತರು ಒಂದೇ ದಿನ ಕೊನೆಯುಸಿರೆಳೆದಿದ್ದರೆ.

ಅಂಬರೀಶ್ ಕೇವಲ ಕನ್ನಡ ಚಿತ್ರರಂಗದಲ್ಲಷ್ಟೇ ಅಲ್ಲ. ತೆಲುಗು, ತಮಿಳು, ಹಿಂದಿ ಚಿತ್ರರಂಗದ ಸೂಪರ್‌ಸ್ಟಾರ್‌ಗಳ ಜೊತೆ ಉತ್ತಮ ಸ್ನೇಹ ಬಾಂಧವ್ಯವನ್ನು ಇಟ್ಟುಕೊಂಡಿದ್ದರು. ದಕ್ಷಿಣ ಭಾರತದಲ್ಲಿ ರಜನಿಕಾಂತ್, ಚಿರಂಜೀವಿ, ಮೋಹನ್ ಬಾಬು ಮತ್ತು ಹಿಂದಿ ಚಿತ್ರರಂಗದಲ್ಲಿ ಶತ್ರುಘ್ನ ಸಿನ್ಹ ಉತ್ತಮ ಸ್ನೇಹಿತ ಅನ್ನೋದು ಗೊತ್ತೇ ಇದೆ. ಆದರೆ, ಧರ್ಮೇಂದ್ರ ಜೊತೆ ಕೂಡ ಅಷ್ಟೇ ಒಳ್ಳೆಯ ಸ್ನೇಹವಿತ್ತು ಹಾಗು ಸ್ನೇಹಿತರಾಗಿದ್ದರು.

ಈ ಸ್ನೇಹದ ಬಗ್ಗೆ ಹಿರಿಯ ನಟ ದೊಡ್ಡಣ್ಣ ಕೆಲವು ಇಂಟ್ರೆಸ್ಟಿoಗ್ ವಿಷಯಗಳನ್ನು ಬಹಿರಂಗ ಪಡಿಸಿದ್ದಾರೆ. ಧರ್ಮೇಂದ್ರ ಏನಾದರೂ ಮೈಸೂರು ಕಡೆಗೆ ಬಂದರೆ, ಅಲ್ಲಿ ಅಂಬರೀಶ್ ಹಾಜರಿರುತ್ತಿದ್ದರು. ಧರ್ಮೇಂದ್ರ ಕೂಡ ಮೊದಲು ಭೇಟಿ ಮಾಡುತ್ತಿದ್ದಿದ್ದೇ ಅಂಬಿಯನ್ನು. ಮೈಸೂರಿನ ಜನಪ್ರಿಯ ಮೈಲಾರಿ ದೋಸೆ ಹೋಟೆಲ್‌ನಲ್ಲಿ ಧರ್ಮೆಂದ್ರಗೆ ಬ್ರೇಕ್‌ಫಾಸ್ಟ್ ಮಾಡಿಸುತ್ತಿದ್ದರಂತೆ. ಒಮ್ಮೆ ಮೈಸೂರಿನಲ್ಲಿ ಧರ್ಮೇಂದ್ರ ಬರುತ್ತಾರೆಂದು ಬ್ಯಾರಿಕೇಡ್ ಹಾಕಿಸಿ ದೋಸೆ ತಿನ್ನಿಸಿ ಕಳುಹಿಸುತ್ತಿದ್ದರು ಹಾಗು ಮೈಸೂರಿನ ಮತ್ತೊಂದು ಜನಪ್ರಿಯ ಹನುಮಂತು ಬಿರಿಯಾನಿ ಹೋಟೆಲ್‌ನ ರುಚಿಯನ್ನು ತೋರಿಸಿದ್ದರಂತೆ. ಅಲ್ಲಿನ ಬಿರಿಯಾನಿಯನ್ನು ತಿನಿಸಿಯೇ ಧರ್ಮೇಂದ್ರ ಅವರನ್ನು ಕಳುಹಿಸುತ್ತಿದ್ದರಂತೆ. ಅಂಬರೀಶ್ ಅವರ ಲೈಫ್ ಸೈಲ್ ನೋಡಿ, ಧರ್ಮೇಂದ್ರ "ಕೈಸೆ ದಿಲ್‌ದಾರ್ ಆದ್ಮಿರೇ ಏ ಆದ್ಮೀ" ಎಂದು ಹೇಳಿದ್ದರಂತೆ. ದೊಡ್ಡಣ್ಣ ಕಂಡoತೆ ಧರ್ಮೇಂದ್ರ ಎಷ್ಟು ಸುಂದರ ನಟನೋ ಅಷ್ಟೇ ಕೋಪಿಷ್ಠ. ಆದರೆ, ಮನಸ್ಸು ಮಾತ್ರ ಮೃಧುವಾಗಿತ್ತು ಎಂದು ದೊಡ್ಡಣ್ಣ ನೆನಪಿಸಿಕೊಂಡಿದ್ದಾರೆ.

#NammaSuperstars #starkannada #nammasuperstars #Dharmendra #Ambreesh #friendshipgoals

6 months ago (edited) | [YT] | 2

NAMMA SUPERSTARS

ಹಿಂದಿ ಸಿನಿಮಾದ ಹೀ-ಮ್ಯಾನ್ - ಧರ್ಮೇಂದ್ರ - ಆಜರಾಮರ :📽🎬😊


ಧರ್ಮೇಂದ್ರ ಕೇವಲ್ ಕ್ರಿಶನ್ ಡಿಯೋಲ್ ಬ್ರಿಟಿಷ್ ಭಾರತದ ಪಂಜಾಬ್‌ನ ಲುಧಿಯಾನ ಜಿಲ್ಲೆಯ ನಸ್ರಾಲಿ ಎಂಬ ಹಳ್ಳಿಯಲ್ಲಿ ಡಿಸೆಂಬರ್ ೮, ೧೯೩೫ ರಂದು ಜನಿಸಿದರು . ಅವರು ಕೇವಲ್ ಕ್ರಿಶನ್ ಮತ್ತು ಸತ್ವಂತ್ ಕೌರ್ ದಂಪತಿಗಳ ಪುತ್ರರಾಗಿದ್ದರು ಮತ್ತು ಪಂಜಾಬಿ ಜಾಟ್ ಕುಟುಂಬದಲ್ಲಿ ಜನಿಸಿದರು.

ಅವರು ತಮ್ಮ ಆರಂಭಿಕ ಜೀವನವನ್ನು ಸಹ್ನೆವಾಲ್ ಗ್ರಾಮದಲ್ಲಿ ಕಳೆದರು ಮತ್ತು ಲುಧಿಯಾನದ ಲಾಲ್ಟನ್ ಕಲಾನ್‌ನಲ್ಲಿರುವ ಸರ್ಕಾರಿ ಹಿರಿಯ ಮಾಧ್ಯಮಿಕ ಶಾಲೆಯಲ್ಲಿ ಅಧ್ಯಯನ ಮಾಡಿದರು , ಅಲ್ಲಿ ಅವರ ತಂದೆ ಹಳ್ಳಿಯ ಶಾಲೆಯ ಮುಖ್ಯೋಪಾಧ್ಯಾಯರಾಗಿದ್ದರು. ಅವರು ೧೯೫೨ ರಲ್ಲಿ ಫಾಗ್ವಾರಾದಲ್ಲಿ ಮೆಟ್ರಿಕ್ಯುಲೇಷನ್ ಮಾಡಿದರು.

ಧರ್ಮೇಂದ್ರ ಫಿಲ್ಮ್ಫೇರ್ ನಿಯತಕಾಲಿಕೆಯ ರಾಷ್ಟ್ರೀಯವಾಗಿ ಸಂಘಟಿತವಾದ ಹೊಸ ಪ್ರತಿಭಾ ಪ್ರಶಸ್ತಿಯನ್ನು ಗೆದ್ದಿದ್ದಾರೆ. ಚಿತ್ರರಂಗದಲ್ಲಿ ಕೆಲಸ ಮಾಡಲು ಪಂಜಾಬ್‌ನಿoದ ಮುಂಬೈಗೆ ಹೋಗಿದ್ದರು. ನಂತರ ಅವರು ೧೯೬೦ ರಲ್ಲಿ ಅರ್ಜುನ್ ಹಿಂಗೋರಾನಿ ಅವರ ಪ್ರಣಯ ನಾಟಕ ದಿಲ್ ಭಿ ತೇರಾ ಹಮ್ ಭಿ ತೇರೆ ಮೂಲಕ ಚಲನಚಿತ್ರಕ್ಕೆ ಪಾದಾರ್ಪಣೆ ಮಾಡಿದರು. ಈ ಚಿತ್ರವು ಹೆಚ್ಚಾಗಿ ಗಮನ ಸೆಳೆಯಲಿಲ್ಲ ಮತ್ತು ಪರಿಣಾಮವಾಗಿ, ಗಲ್ಲಾಪೆಟ್ಟಿಗೆಯಲ್ಲಿ ಅಷ್ಟೊಂದು ಉತ್ತಮ ಪ್ರದರ್ಶನ ನೀಡಲಿಲ್ಲ. ಅವರು ೧೯೬೧ ರಲ್ಲಿ ರಮೇಶ್ ಸೈಗಲ್ ಅವರ ಶೋಲಾ ಔರ್ ಶಬ್ನಮ್‌ನೊಂದಿಗೆ ತಮ್ಮ ಮೊದಲ ಯಶಸ್ಸನ್ನು ಕಂಡರು ಮತ್ತು ಅದರ ನಂತರ ಮೋಹನ್ ಕುಮಾರ್ ಅವರ ಅನ್ಪದ್ ಮತ್ತು ಬಿಮಲ್ ರಾಯ್ ಅವರ ಬಂಡಿನಿ ನಂತಹ ಹಿಟ್‌ಗಳೊಂದಿಗೆ ಯಶಸ್ವಿಯಾದರು , ಇದು ಹಿಂದಿಯಲ್ಲಿ ಅತ್ಯುತ್ತಮ ಚಲನಚಿತ್ರಕ್ಕಾಗಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಗೆದ್ದಿತು.

ವರ್ಷದಲ್ಲಿ ಎರಡು ಬಾರಿ ಏಳು ಯಶಸ್ವಿ ಚಿತ್ರಗಳನ್ನು ನೀಡಿದ ಏಕೈಕ ನಟ ಧರ್ಮೇಂದ್ರ. ೧೯೭೩ ರಲ್ಲಿ, ಜುಗ್ನು , ಯಾದೋನ್ ಕಿ ಬಾರಾತ್ , ಲೋಫರ್ , ಕಹಾನಿ ಕಿಸ್ಮತ್ ಕಿ , ಜೀಲ್ ಕೆ ಉಸ್ ಪಾರ್ , ಕೀಮತ್ ಮತ್ತು ಬ್ಲ್ಯಾಕ್ ಮೇಲ್ ಸೇರಿದಂತೆ ಅವರ ಯಶಸ್ವಿ ಚಲನಚಿತ್ರಗಳು ೧೯೮೭ ರಲ್ಲಿ ಅವರ ಲಾಭದಾಯಕ ಉದ್ಯಮಗಳು ಹುಕುಮತ್ , ಆಗ್ ಹಿ ಆಗ್ , ಲೋಹಾ , ಇನ್ಸಾನಿಯತ್ ಕೆ ದುಶ್ವಾಫ್ , ಇನ್ಸಾಫ್ , ಇನ್ಸಾಫ್ , ಕೇಸ್ ಮಾನ್ ಕೌನ್ ಕರೇಗಾ .

ಧರ್ಮೇಂದ್ರ ಅವರನ್ನು ಭಾರತೀಯ ಸಿನಿಮಾ ಇತಿಹಾಸದಲ್ಲಿ ಶ್ರೇಷ್ಠ, ಅತ್ಯಂತ ಸುಂದರ ಮತ್ತು ವಾಣಿಜ್ಯಿಕವಾಗಿ ಯಶಸ್ವಿ ಚಲನಚಿತ್ರ ತಾರೆಗಳಲ್ಲಿ ಒಬ್ಬರೆಂದು ವ್ಯಾಪಕವಾಗಿ ಪರಿಗಣಿಸಲಾಗಿತ್ತು ೬೫ ವರ್ಷಗಳ ವೃತ್ತಿಜೀವನದಲ್ಲಿ, ಅವರು ೩೦೦ ಕ್ಕೂ ಹೆಚ್ಚು ಚಿತ್ರಗಳಲ್ಲಿ ಕೆಲಸ ಮಾಡಿದರು, ಹಿಂದಿ ಸಿನಿಮಾದಲ್ಲಿ ಅತಿ ಹೆಚ್ಚು ಹಿಟ್ ಚಿತ್ರಗಳಲ್ಲಿ ನಟಿಸಿದ ದಾಖಲೆಯನ್ನು ಹೊಂದಿದ್ದಾರೆ.

ಕoಕನ್ ದೆ ಓಹ್ಲೆ (೧೯೭೦), ದೋ ಶೇರ್ (೧೯೭೪), ದುಖ್ ಭಂಜನ್ ತೇರಾ ನಾಮ್ (೧೯೭೪), ತೇರಿ ಮೇರಿ ಇಕ್ ಜಿಂದ್ರಿ (೧೯೭೫), ಪುಟ್ ಜತ್ತನ್ ದೇ (೧೯೮೨) ಮತ್ತು ಕುರ್ಬಾನಿ ಜಟ್ ಡಿ (೧೯೯೦) ನಲ್ಲಿ ನಟಿಸಿದ ಪಂಜಾಬಿಯ ಮಾತೃಭಾಷೆಯ ಚಲನಚಿತ್ರಗಳಲ್ಲಿ ಅವರು ನಿಯತಕಾಲಿಕವಾಗಿ ಕಾಣಿಸಿಕೊಂಡಿದ್ದಾರೆ . ಅವರು ೨೦೧೪ ರ ಚಲನಚಿತ್ರ ಡಬಲ್ ಡಿ ಟ್ರಬಲ್‌ನೊಂದಿಗೆ ಸ್ವಲ್ಪ ಸಮಯದ ನಂತರ ಪಂಜಾಬಿ ಚಿತ್ರರಂಗಕ್ಕೆ ಮರಳಿದರು.

೨೦೧೧ ರಲ್ಲಿ, ಧರ್ಮೇಂದ್ರ ಯಮ್ಲಾ ಪಗ್ಲಾ ದಿವಾನಾ ಮತ್ತು ಟೆಲ್ ಮಿ ಓ ಖುಡಾ ಚಿತ್ರಗಳಲ್ಲಿ ನಟಿಸಿದರು. ಎರಡನೆಯದು ವಾಣಿಜ್ಯಿಕವಾಗಿ ವಿಫಲವಾದರೂ, ಯಮ್ಲಾ ಪಗ್ಲಾ ದಿವಾನಾ ಉತ್ತಮ ಪ್ರದರ್ಶನ ನೀಡಿ ಗಲ್ಲಾಪೆಟ್ಟಿಗೆಯಲ್ಲಿ ಯಶಸ್ವಿಯಾಯಿತು. ನಂತರ ಅವರು ಯಮ್ಲಾ ಪಗ್ಲಾ ದಿವಾನಾ , ಯಮ್ಲಾ ಪಗ್ಲಾ ದಿವಾನಾ ೨ (೨೦೧೩) ಮತ್ತು ಯಮ್ಲಾ ಪಗ್ಲಾ ದಿವಾನಾ ಫಿರ್ ಸೆ (೨೦೧೮) ಚಿತ್ರಗಳ ಉತ್ತರಭಾಗಗಳಲ್ಲಿ ಕಾಣಿಸಿಕೊಂಡರು. ೨೦೨೩ ರಲ್ಲಿ, ಅವರು ಕರಣ್ ಜೋಹರ್ ಅವರ ಸಮಗ್ರ ಕುಟುಂಬ ನಾಟಕ ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿಯಲ್ಲಿ ಕಾಣಿಸಿಕೊಂಡರು.

ಧರ್ಮೇಂದ್ರ ೨೦೦೪ ರಿಂದ ೨೦೦೯ ರವರೆಗೆ ರಾಜಸ್ಥಾನದ ಬಿಕಾನೇರ್ ಅನ್ನು ಪ್ರತಿನಿಧಿಸುವ ಭಾರತೀಯ ಜನತಾ ಪಕ್ಷದಿಂದ ಭಾರತೀಯ ಸಂಸತ್ತಿನ (ಲೋಕಸಭೆ) ಸದಸ್ಯರಾಗಿ ಸೇವೆ ಸಲ್ಲಿಸಿದರು. ಧರ್ಮೇಂದ್ರ ಅವರು ಲೋನಾವಾಲದಲ್ಲಿ ಒಂದು ತೋಟದ ಮನೆಯನ್ನು ಹೊಂದಿದ್ದರು , ಅಲ್ಲಿ ಅವರು ತಮ್ಮ ಕೊನೆಯ ವರ್ಷಗಳಲ್ಲಿ ವಾಸಿಸುತ್ತಿದ್ದರು. ಅವರ ಕುಟುಂಬ ಮುಂಬೈನ ಜುಹುನಲ್ಲಿ ವಾಸಿಸುತ್ತಿದ್ದರು.

ಧರ್ಮೇಂದ್ರ ಅವರನ್ನು ಭಾರತೀಯ ಚಿತ್ರರಂಗದ ಅತ್ಯಂತ ಪ್ರಭಾವಶಾಲಿ ವ್ಯಕ್ತಿಗಳಲ್ಲಿ ಒಬ್ಬರೆಂದು ವ್ಯಾಪಕವಾಗಿ ಪರಿಗಣಿಸಲಾಗಿದೆ. ಅವರು ತಮ್ಮ ವೃತ್ತಿಜೀವನದ ಆರಂಭದಲ್ಲಿ ವಿಶ್ವದ ಅತ್ಯಂತ ಸುಂದರ ಪುರುಷರಲ್ಲಿ ಒಬ್ಬರೆಂದು ಪರಿಗಣಿಸಲ್ಪಟ್ಟರು ಮತ್ತು ಬಾಲಿವುಡ್‌ನ "ಹೀ-ಮ್ಯಾನ್" ಎಂದು ವ್ಯಾಪಕವಾಗಿ ಪ್ರಸಿದ್ಧರಾಗಿದ್ದಾರೆ. "ಸಾರ್ವಕಾಲಿಕ ಟಾಪ್ ೧೦ ಬಾಲಿವುಡ್ ನಟರು" ಪಟ್ಟಿಯಲ್ಲಿ ೧೦ ನೇ ಸ್ಥಾನದಲ್ಲಿದೆ.

೨೦೨೩ ರಲ್ಲಿ, ಧರ್ಮೇಂದ್ರ ಅವರು ಬಾಲಿವುಡ್ ತಮ್ಮ ಕುಟುಂಬವನ್ನು ನಿರ್ಲಕ್ಷಿಸಿದ್ದಾರೆ ಮತ್ತು ಭಾರತೀಯ ಚಿತ್ರರಂಗಕ್ಕೆ ಡಿಯೋಲ್ ಕುಟುಂಬದ ಕೊಡುಗೆಯನ್ನು ಎಂದಿಗೂ ಮೆಚ್ಚಲಿಲ್ಲ ಎಂದು ವ್ಯಕ್ತಪಡಿಸಿದರು.

ಅರುಣ್ ಖೇತರ್ಪಾಲ್ ಅವರ ಜೀವನವನ್ನು ಆಧರಿಸಿದ ಯುದ್ಧ ನಾಟಕ ಇಕ್ಕಿಸ್ (೨೦೨೫) ಅವರ ಸುಪ್ರಸಿದ್ಧ ವೃತ್ತಿಜೀವನದ ಕೊನೆಯ ಚಿತ್ರವಾಗಿತ್ತು, ಆದರೆ ಚಿತ್ರ ಬಿಡುಗಡೆಯಾಗುವ ಮೊದಲೇ ಧರ್ಮೇಂದ್ರ ೨೦೨೫ ರ ನವೆಂಬರ್ ೨೪ ರಂದು ತಮ್ಮ ೮೯ ನೇ ವಯಸ್ಸಿನಲ್ಲಿ ತಮ್ಮ ನಿವಾಸದಲ್ಲಿ ನಿಧನರಾದರು. ಅವರು ಇಬ್ಬರು ಹೆಂಡತಿಯರು, ಆರು ಮಕ್ಕಳು ಮತ್ತು ಹದಿಮೂರು ಮೊಮ್ಮಕ್ಕಳನ್ನು ಅಗಲಿದ್ದಾರೆ.

#NammaSuperstars #starkannada #nammasuperstars #Dhramendra #bollywoodmovies #Hindimovies #actor #heman #sucessfullactor #deolfamilies

6 months ago (edited) | [YT] | 2

NAMMA SUPERSTARS

ಕಡಲೆಕಾಯಿ ಪರಿಷೆಯಲ್ಲಿ ಡಿಂಪಲ್ ಕ್ವಿನ್ ರೌಂಡ್ : ☺

ನಟಿ ಡಿಂಪಲ್ ಕ್ವಿನ್ ರಚಿತಾ ರಾಮ್ ಬೆಂಗಳೂರಿನ ಬಸವನಗುಡಿಯಲ್ಲಿ ನಡೆಯುತ್ತಿರುವ ಕಡಲೆಕಾಯಿ ಪರಿಷೆಯಲ್ಲಿ ಯಾರಿಗೂ ಗುರುತು ಸಿಗದಂತೆ ಫ್ಯಾನ್ಸಿಮಾಸ್ಕ್ ಧರಿಸಿ ರೌಂಡ್ ಹಾಕಿದ್ದಾರೆ. ಜನರು ನೋಡಿ ಸೆಲ್ಸಿ ಕ್ಲಿಕ್ಕಿಸಿಕೊಳ್ಳುವುದನ್ನು ತಪ್ಪಿಸಿಕೊಳ್ಳುವ ಸಲುವಾಗಿ ಕಿತ್ತಳೆ ಬಣ್ಣದ ಚಿರತೆಯಂಥ ಪ್ರಾಣಿಯೊಂದರ ಮುಖವಾಡ ಧರಿಸಿ, ಕತ್ತಿನ ಸುತ್ತ ತಿಳಿ ಕಿತ್ತಳೆ ಬಣ್ಣದ ಬಟ್ಟೆ ಧರಿಸಿದರೆ.

'ಈ ಥರ ಮಂಕಿ ಮಾಸ್ಕ್ ಹಾಕಿ ಪರಿಷೆಗೆ ಹೋಗಿದ್ದು ಇದೇ ಮೊದಲು. ಯಾವಾಗಲೂ ದುಪಟ್ಟಾ ಕಟ್ಟಿಕೊಂಡು, ಹುಡ್ ಧರಿಸಿ ಹೋಗುತ್ತಿದ್ದರು ಮತ್ತು ಆದರೆ ಅವರ ಧ್ವನಿ, ವಾಚ್, ಉಂಗುರ, ಅದರಲ್ಲೂ ಅವರ ಕಣ್ಣು ಹಾಗೂ ಹುಬ್ಬನ್ನು ನೋಡಿ ಜನರು ಬೇಗ ಗುರುತಿಸುತ್ತಾರೆ ಹಾಗು ಚಿಕ್ಕ ವಯಸ್ಸಿನಲ್ಲಿ ಅವರ ತಂದೆ ಅವರನ್ನು ಕಡಲೆಕಾಯಿ ಪರಿಷೆಗೆ ಕರೆದುಕೊಂಡು ಹೋಗುತ್ತಿದ್ದರು. ಅಲ್ಲಿಗೆ ಹೋಗಲು ಆಗದಿದ್ದರೂ ಅವರ ಮನೆಗೆ ಕಡಲೆಕಾಯಿ ಬರುತ್ತಿತ್ತು. ದೊಡ್ಡ ಗಣಪತಿ ದೇಗುಲ ಅವರ ಮನೆಯಿಂದ ನಡೆದು ಹೋಗುವಷ್ಟು ಹತ್ತಿರವಿತ್ತು' ಎಂದು ರಚಿತಾ ರಾಮ್ ಹೇಳಿಕೊಂಡಿದ್ದಾರೆ.


#NammaSuperstars #starkannada #nammasuperstars #rachitharam #DimpleQueen #monkeymask #kadalekaiparishe

6 months ago | [YT] | 1

NAMMA SUPERSTARS

ಕೆಸಿಎಲ್ ಸೀಸನ್ 2 ಜೆರ್ಸಿ, ಟ್ರೋಫಿ ಅನಾವರಣ : 🏆☺

ನವೆಂಬರ್ 22 ,23 ರಂದು ನಡೆಯುವ ನಮ್ಮನೆ ಕನ್‌ಸ್ಟ್ರಕ್ಷನ್ಸ್ ಮೈಸೂರು ಪ್ರಸ್ತುತಪಡಿಸುತ್ತಿರುವ ಗಲ್ಫ್ ಕರ್ನಾಟಕ ಕುಟುಂಬ ಆಯೋಜಿಸಿರುವ ಕರ್ನಾಟಕ ಕ್ರಿಕೆಟ್ ಲೀಗ್ (ಕೆಸಿಎಲ್) ಸೀಸನ್ 2ರ, ಅಧಿಕೃತ ಜೆರ್ಸಿ ಮತ್ತು ಟ್ರೋಫಿ ಬಿಡುಗಡೆ ಕಾರ್ಯಕ್ರಮ ಅದ್ಧೂರಿಯಾಗಿ ನಡೆಯಿತು.

ದುಬೈಯಲ್ಲಿ ಇತ್ತೀಚೆಗೆ ಬರ್ಷಾ ಹೈಟ್ಸ್ನ ಮಿಲೇನಿಯಮ್ ಪ್ಲೇಸ್‌ನಲ್ಲಿ ಅನಾವರಣ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದಲ್ಲಿ ಜನಪ್ರಿಯ ಕನ್ನಡ ನಟ ಮತ್ತು ಬರಹಗಾರ ಶನೀಲ್ ಗೌತಮ್ , ಯುಎಇ ಮಾಜಿಮಹಿಳಾ ಕ್ರಿಕೆಟ್ ತಂಡದ ನಾಯಕಿ ಛಾಯಾ ಮೊಘಲ್ ಅವರು ಭಾಗವಹಿಸಿದ್ದರು. ಈ ವೇಳೆ ತಂಡದ ಮಾಲೀಕರು, ಆಟಗಾರರು, ಪ್ರಾಯೋಜಕರು, ಕ್ರಿಕೆಟ್ ಪ್ರೇಮಿಗಳು ಇದ್ದರು.

ಕಾರ್ಯಕ್ರಮದಲ್ಲಿ ಕರ್ನಾಟಕದ ವಿವಿಧ ಭಾಗಗಳಿಂದ ಭಾಗವಹಿಸುವ 16 ತಂಡಗಳ ಹೊಸ ಜೆರ್ಸಿಗಳನ್ನು ಬಿಡುಗಡೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಸಂವಾದಗಳು, ತಂಡದ ಪರಿಚಯ, ಪ್ರಾಯೋಜಕರ ಸ್ವೀಕೃತಿಗಳು ಮತ್ತು ಲೀಗ್‌ನ ಮುನ್ನೋಟವನ್ನು ತಿಳಿಸಲಾಯಿತು.

ಕೆಸಿಎಲ್ ಸೀಸನ್ 2ರ ಶೀರ್ಷಿಕೆ ಪ್ರಾಯೋಜಕರಾದ ನಮ್ಮನೆ ಕನ್‌ಸ್ಟ್ರಕ್ಷನ್ ಮೈಸೂರು, ಗೋಲ್ಡ್ ಪ್ರಾಯೋಜಕರಾದ ಕೊರವಿ ಡೆವಲಪರ್ಸ್, ಸಿಲ್ವರ್ ಪ್ರಾಯೋಜಕರಾದ ಸ್ಯಾಂಟೂ ಸೀಲ್ಸ್ ಟೆಕ್ನಾಲಜೀಸ್ ಅವರಿಗೆ ಆಯೋಜಕರು ಕೃತಜ್ಞತೆಗಳನ್ನು ಸಲ್ಲಿಸಿದರು.

ಈಗ ಎಲ್ಲರ ಕಣ್ಣುಗಳು ನವೆಂಬರ್ 22 ಮತ್ತು 23ರಂದು ಬಿಜಾಯ್ಸ್ ಕ್ರಿಕೆಟ್ ಕ್ಲಬ್‌ನಲ್ಲಿ ನಡೆಯಲಿರುವ ಮುಖ್ಯ ಪಂದ್ಯಾವಳಿಯತ್ತ ಮುಖ ಮಾಡಿದೆ. 16 ಬಲಿಷ್ಠ ತಂಡಗಳು 2 ದಿನಗಳ ಕಾಲ ಸ್ಪರ್ಧಿಸಲಿವೆ. ಈ ಕಾರ್ಯಕ್ರಮ ಗಲ್ಫ್ ಕರ್ನಾಟಕ ಕುಟುಂಬ ಮತ್ತು ಕ್ರಿಕೆಟ್ ಪ್ರಿಯರನ್ನು, ಹೆಚ್ಚಿನ ಪ್ರೇಕ್ಷಕರನ್ನು ಆಕರ್ಷಿಸುವ ನಿರೀಕ್ಷೆಯಿದೆ.

ಕೆಸಿಎಲ್ ಸೀಸನ್ 2ರ ಮೂಲಕ ಸ್ಥಳೀಯ ಪ್ರತಿಭೆಗಳನ್ನು ಉತ್ತೇಜಿಸಲು, ಸಮುದಾಯ ಬಾಂಧವ್ಯವನ್ನು ಬೆಳೆಸಲು ಮತ್ತು ವಿಶ್ವ ದರ್ಜೆಯ ಕ್ರಿಕೆಟ್ ಅನುಭವವನ್ನು ನೀಡಲು ಕ್ರಮ ವಹಿಸಲಾಗುತ್ತಿದೆ.

#NammaSuperstars #starkannada #nammasuperstar #KCL #jersey #Season2 #throphy #launch #November2025

6 months ago (edited) | [YT] | 1

NAMMA SUPERSTARS

ಉತ್ತರ ಕರ್ನಾಟಕದಲ್ಲಿ ಕ್ರಿಮಿನಲದ ಧ್ರುವ ಸರ್ಜಾ : 📽🎬🙂

'ಕೆರೆಬೇಟೆ'ಯಂಥ ನಮ್ಮ ನೆಲದ ಮಣ್ಣಿನ ಕಥೆಯನ್ನು ನಿರ್ದೇಶನ ಮಾಡಿದ್ದ ರಾಜ್‌ಗುರು ಈಗ ಐದು ಭಾಷೆಗಳಲ್ಲಿ ತೆರೆಗೆ ಬರುತ್ತಿರುವ ಪ್ಯಾನ್ ಇಂಡಿಯಾ ಸಿನಿಮಾ 'ಕ್ರಿಮಿನಲ್'. ಈ ಸಿನಿಮಾದಲ್ಲಿ ಧ್ರುವ ಸರ್ಜಾ ನಟನೆಗೆ ಉತ್ತರ ಕರ್ನಾಟಕದ ಹಳ್ಳಿ ಸೊಗಡಿನ ಸಿನಿಮಾಗೆ ಅಕ್ಷನ್ ಕಟ್ ಹೇಳುತ್ತಿದ್ದಾರೆ.

ಈ ಸಿನಿಮಾದಲ್ಲಿ ಧ್ರುವ ಸರ್ಜಾ ಪಾತ್ರ ಸಂಪೂರ್ಣ ಹೊಸದು. ಇದರಲ್ಲಿ ಪ್ರೇಕ್ಷಕರನ್ನು ನಗಿಸಿ, ಅಳಿಸಿ, ಎಮೋಷನಲ್ ಮಾಡುತ್ತ ಕನೆಕ್ಟ್ ಆಗುತ್ತಾರೆ. ಮೊದಲ ಬಾರಿಗೆ ಉತ್ತರ ಕರ್ನಾಟಕದ ಜವಾರಿ ಭಾಷೆಯ ಡೈಲಾಗ್ಸ್ ಬಗ್ಗೆ ಧ್ರುವ ಸರ್ಜಾ ಬಹಳ ಎಕ್ಸೆಟ್ ಆಗಿದ್ದಾರೆ ಹಾಗು ಸ್ಥಳೀಯ ಸ್ವಾಗ್ ನೊಂದಿಗೆ ಅಭಿಮಾನಿಗಳನ್ನು ರಂಜಿಸಲಿದ್ದಾರೆ.

'ಈ ಚಿತ್ರಕ್ಕೆ ವೈದಿ ಕ್ಯಾಮೆರಾ ವರ್ಕ್ ಮಾಡುತ್ತಿದ್ದು, ಇತರ ಪಾತ್ರಗಳಲ್ಲಿ ಅಚ್ಯುತ್ ಕುಮಾರ್, ಗೋಪಾಲಕೃಷ್ಣ ದೇಶಪಾಂಡೆ, ತಾರಾ ನಟಿಸಿದ್ದಾರೆ. ಇವರೊಂದಿಗೆ ಉತ್ತರ ಕರ್ನಾಟಕದ ಸಾಕಷ್ಟು ರಂಗಕಲಾವಿದರು ಕಾಣಿಸಿಕೊಳ್ಳಲಿದ್ದಾರೆ. ಕನ್ನಡದ ಸ್ಟಾರ್ ನಟಿ ಈ ಸಿನಿಮಾಗೆ ಬೇಕಿತ್ತು. ಹಾಗಾಗಿ ರಚಿತಾ ರಾಮ್‌ರನ್ನು ಆಯ್ಕೆ ಮಾಡಿದೆವೆ' ಎಂದು ಚಿತ್ರರಂಡ ಹೇಳಿಕೊಂಡಿದ್ದಾರೆ.

#NammaSuperstars #starkannada #nammasuperstar #dhruvasarja #rachitharam #raajguru #kannadamovies #sandalwoodmovies

6 months ago | [YT] | 1

NAMMA SUPERSTARS

ಕಂಗ್ರಾಚುಲೇಷನ್ಸ್ ಬ್ರದರ್ : 🎬📽🙂
ಇತ್ತೀಚೆಗೆ ಸೋಶಿಯಲ್ ಮೀಡಿಯಾ ಪ್ರಸಿದ್ಧಿಯಾದ ರಾಜಕಾರಣಿಯ "ಕಂಗ್ರಾಚುಲೇಷನ್ಸ್ ಬ್ರದರ್" ಡೈಲಾಗ್, ಇದೀಗ ಕನ್ನಡ ಚಿತ್ರತಂಡದ ಶೀರ್ಷಿಕೆಯಾಗಿದ್ದು, ಚಿತ್ರಕ್ಕೆ ವಿಶೇಷ ಸ್ವರೂಪ ಕೊಡುತ್ತದೆ.
ಈ ಚಿತ್ರದಲ್ಲಿ ಒಬ್ಬ ಹುಡುಗನಿಗೆ ಇಬ್ಬರು ಹುಡಿಗಿಯರು ಸಿಕ್ಕಾಗ ಏನು ಎಲ್ಲಾ ಆಗುತ್ತದೆ ಮತ್ತು ವಿಭಿನ್ನ ಸಂಗತಿಯನ್ನು ಹಾಸ್ಯ ಮತ್ತು ಭಾವನಾತ್ಮಕದಿಂದ ಚಿತ್ರಿಸಲಾಗಿದೆ. ಪ್ರತಾಪ್ ಗಂಧರ್ವ ಮೊದಲನೆ ಬಾರಿ ನಿರ್ದೇಶನ ಮಾಡಿದ್ದಾರೆ.
ಪ್ರಶಾಂತ್ ಕಲ್ಲೂರ್ (ಕಲ್ಲೂರ್ ಸಿನಿಮಾ), ಹರೀಶ್ ರೆಡ್ಡಿ ನಿರ್ಮಾಣಮಾಡಿದ್ದರೆ. ಶ್ರೀಕಾಂತ್ ಕಶ್ಯಪ್ ಕಾರ್ಯನಿರ್ವಾಹಕ ನಿರ್ಮಾಪಕರಾಗಿದ್ದಾರೆ.
ಈ ಚಿತ್ರಕ್ಕೆ ಹರಿ ಸಂತೊಷ್ ಕಥೆ ಹಾಗು ಕ್ರಿಯೇಟಿವ್ ಹೆಡ್ ಅಗಿ ಕೆಲಸ ಮಾಡಿದ್ದಾರೆ. ಟಿ.ವಿ ಹಾಗು ರಂಗಭೂಮಿ ಕಲಾವಿದ ರಕ್ಷಿತ್ ನಾಗ್ ನಾಯಕ ನಟನಾಗಿ ನಟಿಸಿದ್ದಾರೆ. ಹಿರಿಯ ನಟ ಶಶಿಕುಮಾರ್ ತಂದೆ ಪಾತ್ರದಲ್ಲಿ ಕಾಣಿಸಿಕೊಂಡಿದ್ದರೆ. ನಾಯಕಿಯರಾಗಿ ಸಂಜನಾ ದಾಸ್, ಅನೂಷಾ ನಟಿಸಿದ್ದಾರೆ. ಬೆಂಬಲ ನಟರಾಗಿ ರಕ್ಷತ್ ಕಾಪು, ಸುದರ್ಶನ್, ಚೇತನ್ ದುರ್ಗ ಮತ್ತಿತರರು ನಟಿಸಿದ್ದಾರೆ.
ಈ ಶುಕ್ರವಾರ ರಾಜ್ಯಾದ್ಯಾಂತ ಬಿಡುಗಡೆ ಮಾಡಲು ಚಿತ್ರತಂಡ ಸಜ್ಜಾಗಿದೆ.
#NammaSuperstars #starkannada #nammasuperstars #CongratulationsBrother #Shashikumar

6 months ago | [YT] | 1